ಶಿರಾ

ಸಂಚಾರಿ ಜನಸೇವೆ ಕಾರ್ಯಕ್ರಮದಡಿ ಜನರ ಮನೆಬಾಗಿಲಿಗೆ ಸೇವೆ; ಡಾ.ಸಿ.ಎಂ.ರಾಜೇಶ್ ಗೌಡ

ಮದಲೂರು ಗ್ರಾಮದಲ್ಲಿ ಆಯುಷ್ಮಾನ್ ಕಾರ್ಡ್, ಈ-ಶ್ರಮ್ ಕಾರ್ಡ್ ವಿತರಣೆ

ಶಿರಾ : ಕ್ಷೇತ್ರದ ಜನರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಸಂಚಾರಿ ಜನಸೇವೆ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಈ ಕಾರ್ಯಕ್ರಮದಡಿ ಗ್ರಾಮಗಳಲ್ಲಿಯೇ ಜನರಿಗೆ ಒದಗಿಸಲಾಗುತ್ತಿದೆ ಎಂದು ಶಾಸಕ ಡಾ.ಸಿ.ಎಂ.ರಾಜೇಶ್ ಗೌಡ ಹೇಳಿದರು.
ಅವರು ಮದಲೂರು ಗ್ರಾಮದ ಆಂಜನೇಯ ಸ್ವಾಮಿ ದೇವಾಲಯದ ಮುಂಭಾಗದಲ್ಲಿ ಶಾಸಕರ ಸಂಚಾರಿ ಜನಸೇವೆ ಕಾರ್ಯಕ್ರಮದಡಿ ಈ ಶ್ರಮ್ ಹಾಗೂ ಆಯುಷ್ಮಾನ್ ಕಾರ್ಡ್ ವಿತರಿಸಿ ಮಾತನಾಡಿದರು. ಸರಕಾರದದಿಂದ ಕಾರ್ಮಿಕರಿಗೆ ನೀಡುವ ಸೌಲಭ್ಯಗಳನ್ನು ಪಡೆಯಲು ಈ ಶ್ರಮ್ ಕಾರ್ಡ್ ಹಾಗೂ ಆಯುಷ್ಮಾನ್ ಕರ್ನಾಟಕ ಕಾರ್ಡ್ ಅವಶ್ಯಕವಾಗಿದ್ದು, ಈ ನಿಟ್ಟಿನಲ್ಲಿ ನಮ್ಮ ತಂಡವು ತಾಲ್ಲೂಕಿನ ಗ್ರಾಮಗಳಿಗೆ ತೆರಳಿ ಕ್ಷೇತ್ರದಾದ್ಯಂತ ಪ್ರತಿಗ್ರಾಮದಲ್ಲಿ ಉಚಿತವಾಗಿ ಮಾಡಿಕೊಡಲಿದ್ದು, ಕ್ಷೇತ್ರದ ಪ್ರತಿಯೊಬ್ಬ ಸಾರ್ವಜನಿಕರು ಈ ಸೇವೆಯನ್ನು ಸದುಪಯೋಗಪಡಿಸಿಕೊಳ್ಳಿ ಎಂದರು.
ಈ ಸಂದರ್ಭದಲ್ಲಿ ಮುಖಂಡ ಮೂರ್ತಿ ಮಾಸ್ಟರ್, ಮಾಜಿ ಗ್ರಾ.ಪಂ. ಅಧ್ಯಕ್ಷ ಶಂಕರ್ ಎಂ.ಆರ್, ಸದಸ್ಯರಾದ ಶಿವಣ್ಣ, ಮಧುಸುಧನ್, ಗೋವಿಂದ ರಾಜು, ಆನಂದ, ನರಸಿಂಹಮೂರ್ತಿ, ಅಡವಿಷ್, ಅಮ್ಮಾಜೀ ಸಿದ್ದೇಶ್, ಲೋಕೇಶ್, ಮಂಜುನಾಥ್, ಪುಟ್ಟರಂಗೆ ಗೌಡ ಸೇರಿದಂತೆ ಹಲವರು ಹಾಜರಿದ್ದರು.

Related Articles

Back to top button
Disclaimer: WebOnline.in is not responsible for any news or content. We are only developers for this client And any type of content posted here belong's to site's owner/editor, not WebOnline.in Company

Adblock Detected

Please consider supporting us by disabling your ad blocker