ಜಿಲ್ಲೆತುಮಕೂರು
Trending

ವಸತಿ ರಹಿತರಿಗೆ ಸರ್ಕಾರಿ ನಿವೇಶನ: ಡಾ.ಜಿ.ಪರಮೇಶ್ವರ

ಕೊರಟಗೆರೆ: ವಸತಿರಹಿತರಿಗೆ ಸರ್ಕಾರಿ ಜಾಗಗಳನ್ನು ಗುರುತಿಸಿ ಮನೆಗಳನ್ನು ನಿರ್ಮಾಣ ಮಾಡುವ ಕೆಲಸವನ್ನು ತ್ವರಿತವಾಗಿ ಮಾಡಲಾಗುವುದು ಎಂದು ಶಾಸಕ ಡಾ.ಜಿ.ಪರಮೇಶ್ವರ ತಿಳಿಸಿದರು,
ಕೊರಟಗೆರೆ ವಿಧಾನಸಭಾಕ್ಷೇತ್ರ ವ್ಯಾಪ್ತಿಯ ಬೆಳ ಧರ ಗ್ರಾಮದಲ್ಲಿ ಹಟ್ಟಿ ಮಾರಮ್ಮದೇವಸ್ಥಾನ ಪ್ರತಿಷ್ಠಾಪನಾ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗ ವಹಿಸಿ,ಗ್ರಾಮದ ವಿವಿಧ ಸಮಸ್ಯೆಗಳ ಸ್ಥಳ ಪರಿಶೀಲಿಸಿ ಮಾತನಾಡಿ, ಈಗಾಗಲೆ ಕ್ಷೇತ್ರದ ಎಲ್ಲಾ ಗ್ರಾಮ ಪಂಚಾಯಿತಿಗಳಿಗೆ ೧೦೦ ಆಶ್ರಯ ಮನೆಗಳನ್ನು ವಿಶೇಷವಾಗಿ ಮಂಜೂರು ಮಾಡಿಸಲಾಗಿದೆ, ನಿವೇ ಶÀನ ಇರುವ ಬಡ ಕುಟುಂಬಗಳಿಗೆ ಮನೆ ಮಂ ಜೂರಾಗುವುದು, ಆದೇ ರೀತಿಯಾಗಿ ನಿವೇಶÀನ ರಹಿತ ಕಡು ಬಡವರಿಗೆ ಗ್ರಾಮಗಳಲ್ಲಿನ ಸರ್ಕಾರಿ ಭೂಮಿಗಳ ಗುರುತಿಸಿ ಅವರಿಗೆ ಮನೆಗಳನ್ನು ನಿರ್ಮಿ ಸಿಕೊಡಲಾಗುವುದು ಆದರೆ ಇದರಲ್ಲಿ ಅಧಿಕಾರಿಗಳ ಪಾರದರ್ಶಕತೆ, ಗ್ರಾ.ಪಂ, ಸದಸ್ಯರ ಬದ್ದತೆ ಅತಿ ಮುಖ್ಯವಾಗಿದೆ ಎಂದರು.
ಬೆಳಧರ ಗ್ರಾಮದಲ್ಲಿ ೫.೨೮ ಎಕರೆ ಸರ್ಕಾರಿ ಜ ಮೀನು ಇದ್ದು ಇದರಲ್ಲಿ ೧.೨೮ ಎಕರೆ ಭೂಮಿ ಯನ್ನು ಸಾರ್ವಜನಿಕ ಆಸ್ಪತ್ರೆಗೆ ಮೀಸಲಿಟ್ಟು, ಉಳಿದ ಜಮೀನನ್ನು ನಿರಾಶ್ರಿತ ನಿವೇಶನ ವಸತಿ ಹೀನ ರಿಗೆ ಮನೆಯನ್ನು ನಿರ್ಮಿಸಿಕೊಡಲಾಗುವುದು, ಇದಕ್ಕೆ ಎಲ್ಲಾರ ಸಹಕಾರ ಅಗತ್ಯ, ಅದೇ ರೀತಿಯಾಗಿ ಗ್ರಾಮ ಸ್ಥರ ಬೇಡಿಕೆಯಂತೆ, ಅಲ್ಪಸಂಖ್ಯಾತರ ಸಮುದಾಯ ಭವನ, ಕುಡಿಯುವ ನೀರಿನ ಓವರ್‌ಟ್ಯಾಂಕ್ ಸುಸ ಜ್ಜಿತ ಚರಂಡಿ, ರಸ್ತೆ ಮಾಡಿಸುವ ಭರವಸೆ ನೀಡಿದರು,
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅದ್ಯಕ್ಷ ರು ಗಳಾದ ಅರಕೆರೆಶಂಕರ್, ಕೊಡ್ಲಹಳ್ಳಿ ಅಶ್ವಥ ನಾರಾಯಣ, ನ್ಯಾತೇಗೌಡ ಇತರರಿದ್ದರು.

Related Articles

Back to top button
Disclaimer: WebOnline.in is not responsible for any news or content. We are only developers for this client And any type of content posted here belong's to site's owner/editor, not WebOnline.in Company

Adblock Detected

Please consider supporting us by disabling your ad blocker