ತುರುವೇಕೆರೆ

ಜೆ.ಡಿ.ಎಸ್. ಹಾಗೂ ಕಾಂಗ್ರೇಸ್ ತೊರೆದು ಬಿ.ಜೆ.ಪಿ.ಸೇರ್ಪಡೆಯಾದ ಆಯರಹಳ್ಳಿ ಗ್ರಾಮದ ಮುಖಂಡರುಗಳು

ತುರುವೇಕೆರೆ : ತಾಲೂಕಿನ ಆಯರಹಳ್ಳಿ ಗ್ರಾಮದ ಮುಖಂಡರುಗಳು ಜೆ.ಡಿ.ಎಸ್. ಹಾಗೂ ಕಾಂಗ್ರೇಸ್ ಪಕ್ಷ ತೊರೆದು ಶಾಸಕ ಮಸಾಲಜಯರಾಮ್ ಸಮ್ಮುಖದಲ್ಲಿ ಬಿ.ಜೆ.ಪಿ. ಸೇರ್ಪಡೆಗೊಂಡರು.
ಕಾಂಗ್ರೇಸ್ ಹಾಗೂ ಜೆ.ಡಿ.ಎಸ್. ಪಕ್ಷಗಳಲ್ಲಿ ಗುರತಿಸಿಕೊಂಡಿದ್ದ ಮುಖಂಡರುಗಳನ್ನು ಶಾಸಕ ಮಸಾಲಜಯರಾಮ್ ಪಕ್ಷಕ್ಕೆ ಆತ್ಮೀಯವಾಗಿ ಬರ ಮಾಡಿಕೊಂಡು ಮಾತನಾಡಿ ಭಾರತೀಯ ಜನತಾ ಪಕ್ಷದ ಸಿದ್ದಾಂತ ಹಾಗೂ ಕ್ಷೇತ್ರ ವ್ಯಾಪ್ತಿಯಲ್ಲಿನ ಅಭಿವೃದ್ದಿ ಕಾರ್ಯಗಳನ್ನು ವ್ಮೆಚ್ಚಿ ಇತರೆ ಪಕ್ಷಗಳ ಮುಖಂಡರುಗಳು ನಮ್ಮ ಪಕ್ಷವನ್ನು. ಸೇರ್ಪಡೆಗೊಳ್ಳುತ್ತಿರುವುದು ಸಂತಸದ ವಿಚಾರವಾಗಿದೆ. ಕೆಲ ವರ್ಷಗಳಿಂದ ಕೇವಲ ಮತಬ್ಯಾಂಕ್ ರೀತಿಯಲ್ಲಿ ಅನೇಕ ಗ್ರಾಮದ ಜನತೆಯನ್ನು ಬಳಸಿಕೊಂಡು ಅಭಿವೃದ್ದಿಯನ್ನು ಮಾಡಿರಲಿಲ್ಲ. ನಾನು ಶಾಸಕನಾದ ನಂತರ ಅಭಿವೃದ್ದಿ ವಂಚಿತ ಗ್ರಾಮಗಳಲ್ಲಿ ಅಗತ್ಯ ಕಾಮಗಾರಿಗಳಿಗೆ ಚಾಲನೆ ದೊರಕಿಸಿದ್ದೇನೆ. ಪಕ್ಷವನ್ನು ಮತ್ತಷ್ಟು ಸದೃಡಗೊಳಿಸಲು ಶ್ರಮಿಸುವಂತೆ ಮನವಿ ಮಾಡಿದ ಅವರು ಕ್ಷೇತ್ರದ ಜನತೆಯ ಮತದಾರರ ಆಶೋತ್ತರಗಳಿಗೆ ಧ್ವನಿಯಾಗುವೆ ಎಂದರು.
ಆಯರಹಳ್ಳಿ ಗ್ರಾಮದ ಜೆ,ಡಿ,ಎಸ್. ಬೆಂಬಲಿತ ಸದಸ್ಯ ಸಿದ್ದೇಗೌಡ, ಕಾಂಗ್ರೇಸ್ ಪಕ್ಷ ಯತೀಶ್, ಗಿರೀಶ್, ಡಿಪೋ ಮ್ಯಾನೇಜರ್ ಪುಟ್ಟಸ್ವಾಮಿಗೌಡ, ಕಿರಣ್, ರೇವಣ್ಣ, ತಿಲಕ್ , ಗೋಪಿ ಮತ್ತಿತರರು ಬಿ.ಜೆ.ಪಿ. ಪಕ್ಷ ಸೇರಿದ ಪ್ರಮುಖರೆನಿಸಿದರು.
ಈ ಸಂದರ್ಭದಲ್ಲಿ ತಾಲೂಕು ಬಿ.ಜೆ.ಪಿ. ಅಧ್ಯಕ್ಷ ಮೃತ್ಯಂಜಯ,ಗ್ರಾ.ಪಂ. ಅಧ್ಯಕ್ಷ ನಾಗರಾಜ್, ವಿ.ಎಸ್.ಎಸ್.ಎಮ್ . ಅಧ್ಯಕ್ಷ ಪಾಂಡು,ಗುರುಶಾಂತು,ಚನ್ನಕೇಶವ, ಗೌತಮ್, ಸೇರಿದಂತೆ ಅನೇಕ ಕಾರ್ಯಕರ್ತರುಗಳು ಹಾಜರಿದ್ದರು.

Related Articles

Back to top button
Disclaimer: WebOnline.in is not responsible for any news or content. We are only developers for this client And any type of content posted here belong's to site's owner/editor, not WebOnline.in Company

Adblock Detected

Please consider supporting us by disabling your ad blocker