ಕ್ರೈಂ ನ್ಯೂಸ್ಗುಬ್ಬಿಜಿಲ್ಲೆತುಮಕೂರು

ಬಡ್ಡಿ ದಂಧೆಗೆ ಮತ್ತೊಂದು ಬಲಿ..!! : ನಿಟ್ಟೂರು ವಾಸಿ ರಾಮಸ್ವಾಮಿ ಆತ್ಮಹತ್ಯೆ

ಗುಬ್ಬಿ : ಮೀಟರ್ ಬಡ್ಡಿ ದಂಧೆಗೆ ಬೇಕರಿ ಮಾಲೀಕ ಬಲಿಯಾದ ಘಟನೆ ಮಾಸುವ ಮುನ್ನವೇ ಬಡ್ಡಿ ದಂಧೆ ಕಿರುಕುಳಕ್ಕೆ ಮತ್ತೋರ್ವ ವ್ಯಕ್ತಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ತಾಲ್ಲೂಕಿನ ನಿಟ್ಟೂರಿನಲ್ಲಿ ಮಂಗಳವಾರ ಸಂಜೆ ನಡೆದಿದೆ.

ನಿಟ್ಟೂರು ಗ್ರಾಮದ ಒಲಂಪಿಕ್ ಹೇರ್ ಡ್ರೆಸಸ್ ಅಂಗಡಿ ಮಾಲೀಕ ರಾಮಸ್ವಾಮಿ (45) ಬಡ್ಡಿ ಕಿರುಕುಳಕ್ಕೆ ಬಲಿಯಾದ ವ್ಯಕ್ತಿ. ಯೋಗೀಶ್ ಎಂಬಾತನ ಬಡ್ಡಿ ವ್ಯವಹಾರಕ್ಕೆ ತನ್ನ ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲ್ಲೂಕಿನ ಜನರಲ್ಲಿ ಆತಂಕ ಮೂಡಿಸಿದೆ.

ಕಳೆದ ಆರೇಳು ವರ್ಷದ ಹಿಂದೆ ನಿಟ್ಟೂರು ನಿವಾಸಿ ಯೋಗೀಶ್ ಎಂಬಾತನಿಂದ ಪಡೆದ ಮೂರು ಲಕ್ಷ ರೂಗಳ ಸಾಲಕ್ಕೆ ಬಡ್ಡಿ ಕಟ್ಟುತ್ತಲೇ ಬಂದಿದ್ದ ಮೃತ ರಾಮಸ್ವಾಮಿ ಅವರನ್ನು ಮಂಗಳವಾರ ಹುಡುಕಿ ಬಂದ ಯೋಗೀಶ್ ಒಲಂಪಿಕ್ ಹೇರ್ ಡ್ರೆಸಸ್ಸ್ ಬಳಿ ಇದ್ದ ರಾಮಸ್ವಾಮಿ ಅವರನ್ನು ಕರೆದುಕೊಂಡು ಹೋಗಿ ಒಂದು ತಾಸು ನಂತರ ಮರಳಿ ಬಂದು ತನ್ನ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಯೋಗೀಶ್ ಎಂಬುವವರು ನಿಟ್ಟೂರಿನಲ್ಲಿ ಬಡ್ಡಿ ವ್ಯವಹಾರ ನಡೆಸುತ್ತಿದ್ದು, ನನ್ನ ತಮ್ಮ ರಾಮಸ್ವಾಮಿಗೆ ಬಳಿ ಚೆಕ್ ಪಡೆದು ಸಾಲವಾಗಿ ಮೂರು ಲಕ್ಷ ನೀಡಿ ಆರೇಳು ವರ್ಷದಿಂದ ಬಡ್ಡಿ ವಸೂಲಿ ಮಾಡಿದ್ದಾರೆ. ಬಲಾಢ್ಯರ ಮುಂದೆ ಸಣ್ಣ ಸಮುದಾಯ ಸವಿತಾ ಸಮಾಜದ ನಾವುಗಳು ನೋವು ನುಂಗಿ ಬದುಕುವಂತಾಗಿದೆ. ಸಾಲ ವಸೂಲಿಗೆ ಅಂಗಡಿಯಿಂದ ಕರೆದು ಹೋದ ಯೋಗೀಶ್ ಕಿರುಕುಳಕ್ಕೆ ನನ್ನ ತಮ್ಮ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಮೃತನ ಅಣ್ಣ ಗೋವಿಂದಸ್ವಾಮಿ ತಮ್ಮ ಅಳಲು ತೋಡಿಕೊಂಡರು.

ಸ್ಥಳಕ್ಕೆ ಆಗಮಿಸಿದ ಗುಬ್ಬಿ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

 

Related Articles

Back to top button
Disclaimer: WebOnline.in is not responsible for any news or content. We are only developers for this client And any type of content posted here belong's to site's owner/editor, not WebOnline.in Company

Adblock Detected

Please consider supporting us by disabling your ad blocker