ಕರಡಿಗೆರೆ ಗ್ರಾಮದ ಹೊರ ವಲಯದಲ್ಲಿ ಚಿರತೆ ಮರಿ ಸಾವು
ತುರುವೇಕೆರೆ : ತಾಲ್ಲೂಕಿನ ಮಾವಿನಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕರಡಿಗೆರೆ ಗ್ರಾಮದ ಹೊರ ವಲಯದಲ್ಲಿ ಚಿರತೆ ಮರಿ ಸಾವನ್ನಪ್ಪಿರುವ ಕಳೇಬರ ಭಾನುವಾರ ಪತ್ತೆಯಾಗಿದೆ.
ಕರಡಿಗೆರೆ ಗ್ರಾಮದ ರೈತರು ಭಾನುವಾರ ಬೆಳಗ್ಗೆ ಎಂದಿನಂತೆ ತೋಟಕ್ಕೆ ತೆರಳಿದ ವೇಳೆ ಜವರೇಗೌಡರ ಪಾಳು ಭೂಮಿಯಲ್ಲಿ ಚಿರತೆ ಸಾವನ್ನಪ್ಪಿರುವುದು ಕಂಡು ಬಂದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಆರ್ ಎಫ್.ಒ ಅವರಿಗೆ ದೂರು ನೀಡಿದ್ದಾರೆ.
ಇದಕ್ಕೂ ಮುನ್ನಾ ಚಿರತೆ ಸಾವನ್ನಪ್ಪಿರುವ ಘಟನೆ ತಿಳಿಯುತ್ತಿದ್ದಂತೆ ಕರಡಿಗೆರೆ ಆಸುಪಾಸಿನ ಯುವಕರು, ಗ್ರಾಮಸ್ಥರು ಚಿರತೆ ಸಾವನ್ನಪ್ಪಿದ ಸ್ಥಳದಲ್ಲಿ ಜಮಾಯಿಸಿದ್ದರು.
ಸ್ಥಳಕ್ಕೆ ಬಂಧ ಅರಣ್ಯಧಿಕಾರಿಗಳು ಮತ್ತು ಸಿಬ್ಬಂದಿಗಳು ಪರಿಶೀಲನೆ ನಡೆಸಿ ಸುಮಾರು 6 ತಿಂಗಳ ಗಂಡು ಚಿರತೆ ಮರಿಯಾಗಿದ್ದು ಎರಡೂ ಚಿರತೆಗಳು ಕಿತ್ತಾಡಿಕೊಂಡು ಸಾವನ್ನಪ್ಪಿರುವುದಾಗಿ ಶಂಕೆ ವ್ಯಕ್ತಪಡಿಸಿದ್ದು ಪಶುವೈದ್ಯಾಧಿಕಾರಿಗಳು ಮರಣೋತ್ತರ ಪರೀಕ್ಷೆ ನಡೆಸಿ ಈ ಬಗ್ಗೆ ಇಲಾಖೆಯಲ್ಲಿ ಪ್ರಕರಣ ದಾಖಲಿಸಿಕೊಂಡು ನ್ಯಾಯಾಲಯದ ಅನುಮತಿ ಪಡೆದು ಮೃತ ಚಿರತೆ ಕಳೇಬರವನ್ನು ಸುಡಲಾಗುವುದೆಂದು ಅರಣ್ಯಧಿಕಾರಿಗಳು ತಿಳಿಸಿದರು.