ಎಮ್ಮೆ ಮೇಯಿಸಲು ಹೋದ ತಾಯಿ ಮತ್ತು ಮಗಳು ಕೆರೆಯ ನೀರಿನಲ್ಲಿ ಶವವಾಗಿ ಪತ್ತೆ
ಗುಬ್ಬಿ : ಎಮ್ಮೆ ಮೇಯಿಸಲು ಹೋಗಿದ್ದ ತಾಯಿ ಮತ್ತು ಮಗಳು ಮನನೊಂದು ಕೆರೆಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಧಾರುಣ ಘಟನೆ ತಾಲ್ಲೂಕಿನ ನಿಟ್ಟೂರು ಹೋಬಳಿಯ ಅದಲಗೆರೆ ಗ್ರಾಮದ ಕೆರೆಯಲ್ಲಿ ನಡೆದಿದೆ.
ತಾಲ್ಲೂಕಿನ ನಿಟ್ಟೂರು ಹೋಬಳಿ ವಿರುಪಾಕ್ಷಿ ಪುರ ಗ್ರಾಮದ ವಾಸಿಯಾದ ತಾಯಿ ಪ್ರೇಮ್ ಕುಮಾರಿ (50) ವರ್ಷ ಮಗಳು ಪೂರ್ಣಿಮಾ (30) ವರ್ಷದ ಇಬ್ಬರು ಮೃತ ದುರ್ದೈವಿಗಳು ಎಂದು ತಿಳಿದುಬಂದಿದೆ.
ವಿರುಪಾಕ್ಷಿ ಪುರ ಗ್ರಾಮದಲ್ಲಿ ವಾಸಿಯಾಗಿದ್ದ ತಾಯಿ ಮಗಳು ಕೃಷಿಯೇತರ ಬದುಕಿನಲ್ಲಿ ಜೀವನ ನಡೆಸುತ್ತಿದ್ದು ಮಗಳು ಪೂರ್ಣಿಮಾ ಬುದ್ದಿಮಾಂದ್ಯ ಯುವತಿಯಾಗಿದ್ದು ಈಕೆಗೆ ಮದುವೆಯಾಗಿಲ್ಲ ಎಂಬ ಕಾರಣಕ್ಕೆ ಮಾನಸಿಕವಾಗಿ ಮನನೊಂದು ಇಬ್ಬರು ಕೆರೆಗೆ ಹಾರಿ ಪ್ರಾಣಬಿಟ್ಟಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ.
ಗುರುವಾರ ಎಮ್ಮೆ ಮೇಯಿಸುವ ನಿಟ್ಟಿನಲ್ಲಿ ತೋಟದ ಬಳಿ ಹೋದ ಇಬ್ಬರು ಸಮೀಪದ ಅದಲಗೆರೆ ಗ್ರಾಮದ ಕೆರೆಗೆ ಬಿದ್ದಿದ್ದು ರಾತ್ರಿ ಇಡೀ ಗ್ರಾಮಸ್ಥರ ಸಹಾಯದಿಂದ ತೀವ್ರ ಹುಡುಕಾಟ ನಡೆಸಿದ್ದು ಮೃತ ದೇಹಗಳು ಪತ್ತೆಯಾಗಿರುವುದಿಲ್ಲ.
ನಂತರ ಇಂದು ಕೆರೆಯಲ್ಲಿ ಎರಡೂ ಮೃತದೇಹಗಳು ನೀರಿನಲ್ಲಿ ತೇಲುತ್ತಿರುವ ದೃಶ್ಯ ಕಂಡು ಚೇಳೂರು ಪೊಲೀಸರು ಸೇರಿದಂತೆ ಅಗ್ನಿ ಶಾಮಕ ದಳ ಗ್ರಾಮಸ್ಥರ ಸಹಾಯದಿಂದ ಮೃತ ದೇಹಗಳನ್ನು ಹೊರತೆಗೆದಿದ್ದಾರೆ. ಸ್ಥಳಕ್ಕೆ ಅಪರ ಜಿಲ್ಲಾ ವರಿಷ್ಠಾಧಿಕಾರಿ ಅಬ್ದುಲ್ ಖಾದರ್ ಭೇಟಿ ನೀಡಿದ್ದು ಚೇಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.