ಜಿಲ್ಲೆತುಮಕೂರುಮಧುಗಿರಿ

ಎಸ್.ಪಿ.ಮುದ್ದಹನುಗೌಡರ ವಿರುದ್ಧ ಸ್ವ ಪಕ್ಷದ ಮುಖಂಡ ಮುರುಳಿಧರ ಹಾಲಪ್ಪ ಹೇಳಿಕೆ : ಬಿ.ನಾಗೇಶ ಬಾಬು ಟೀಕೆ

ಮಧುಗಿರಿ :  ಇತ್ತೀಚೆಗೆ ಮಾಜಿ ಲೋಕಸಭಾ ಸದಸ್ಯ ಎಸ್‌ ಪಿ ಎಂ ರವರ ವಿರುದ್ಧ ಸ್ವ ಪಕ್ಷದ  ಮುಖಂಡ ಮುರುಳಿಧರ ಹಾಲಪ್ಪ ರವರು ನೀಡಿರುವ ಪತ್ರಿಕಾ ಹೇಳಿಕೆಯು ಎಐಸಿಸಿ ಅಧ್ಯಕ್ಷರ ತೀರ್ಮಾನವನ್ನು ಮೀರಿದಂತಾಗಿದೆ ಎಂದು ತುಮುಲ್ ಮಾಜಿ ಅಧ್ಯಕ್ಷ ಹಾಗೂ ಡಿಸಿಸಿ ಬ್ಯಾಂಕ್ ನಿರ್ದೇಶಕ ಬಿ.ನಾಗೇಶ ಬಾಬು ಟೀಕಿಸಿದ್ದಾರೆ.
ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು , ಎಐಸಿಸಿ ಅಧ್ಯಕ್ಷರು ಕೆಲ ದಿನಗಳ ಹಿಂದೆ ಯಾರೂ ಸಹ ತಮ್ಮ ಅಸಮಾಧಾನವನ್ನು ಮಾಧ್ಯಮಗಳ ಮೂಲಕ ಹೊರ ಹಾಕದಂತೆ ಸೂಚಿಸಿದ್ದರು ಸಹ ಯಾರು ಬೇಕಾದರೂ ಬಂದು ಹೋಗಲು ಕಾಂಗ್ರೆಸ್ ಸರಕಾರಿ ಬಸ್ , ರೈಲು ನಿಲ್ದಾಣದಂತಲ್ಲಾ ಎಂಬ ಪತ್ರಿಕಾ ಹೇಳಿಕೆಗಳನ್ನು ನೀಡಿ ಕಾಂಗ್ರೆಸ್ ಪಕ್ಷದಲ್ಲಿ ಗೊಂದಲ ಸೃಷ್ಟಿಸಿದ್ದಾರೆ. ಟಿಕೆಟ್ ನೀಡುವುದು ಬಿಡುವುದು ಹೈಕಮಾಂಡ್ ಬಿಟ್ಟ ವಿಚಾರವಾಗಿದೆ.
ಕಳೆದ ಲೋಕಸಭಾ ಚುನಾವಣೆಯಲ್ಲಿ ಇಡೀ ದೇಶದಲ್ಲಿ 44 ಜನ ಹಾಲಿ ಸದಸ್ಯರು ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಪಡೆದು ಕೊಂಡಿದ್ದರು ಆದರೆ ಅನಿವಾರ್ಯ ಕಾರಣಗಳಿಂದಾಗಿ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ವಂಚಿತರಾದ ಹಿನ್ನಲೆಯಲ್ಲಿ  ಪಕ್ಷ ತೊರೆದಿದ್ದರು ಅಷ್ಟೇ‌. ತುಮಕೂರು ಜಿಲ್ಲೆ ಗೆ ಎಸ್ ಪಿ ಮುದ್ದಹನುಗೌಡ ರವರ ಅವಶ್ಯಕತೆ ಹೆಚ್ಚಿದ್ದು ಮುಂದಿನ ದಿನಗಳಲ್ಲಿ ನಡೆಯುವ ಲೋಕ ಸಭಾ ಚುನಾವಣಾ ಅಭ್ಯರ್ಥಿಯಾಗಿ ಕಾಂಗ್ರೆಸ್ ಸ್ಪರ್ಧಿಸಲು ಆರ್ಹರಿದ್ದಾರೆ
ಎಸ್ ಪಿ ಎಂ ರವರು ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷರಾಗಿ , ಶಾಸಕರಾಗಿ , ಲೋಕಸಭಾ ಸದಸ್ಯರಾಗಿ ಕೆಲಸ ಕಾರ್ಯಗಳನ್ನು ನಿರ್ವಹಿಸಿದ್ದಾರೆ  ಹಾಗೂ ಈ ಹಿಂದೆ ಲೋಕಸಭೆಯಲ್ಲಿ ಜಿಲ್ಲೆಯ ಜ್ವಲಂತ ಸಮಸ್ಯೆಗಳ ಬಗ್ಗೆ ಗಮನ ಸಳೆದು , ಜಿಲ್ಲೆಗೆ ಸ್ಮಾರ್ಟ್ ಸಿಟಿ , ಹೆಚ್ ಎ ಎಲ್ ನಿರ್ಮಾಣ , ತುಮಕೂರು ಶಿವಮೊಗ್ಗ ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಯೋಜನೆ ಸೇರಿದಂತೆ ಮತ್ತಿತರ ಕಾಮಗಾರಿಗಳಿಗೆ ಅಡಿಗಲ್ಲು ಹಾಕುವ ಮೂಲಕ ಇಂದಿಗೂ ಜಿಲ್ಲೆಯ ಜನರ ಮನೆ ಮಾತಾಗಿದ್ದಾರೆ.
ಜಿಲ್ಲೆಯಲ್ಲಿ ಏಳು ಜನ ಕಾಂಗ್ರೆಸ್ ಶಾಸಕರಿದ್ದಾರೆ ಇವರುಗಳ ಸಹಕಾರದಿಂದ ಕಾಂಗ್ರೆಸ್ ಪಕ್ಷ ಮತ್ತೆ ಜಿಲ್ಲೆಯಲ್ಲಿ 11 ಕ್ಷೇತ್ರಗಳಲ್ಲೂ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ. ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದ ಟಿಕೆಟ್ ಬೇಡಿಕೆ ಇದೆ.  ಟಿಕೆಟ್ ನೀಡುವ ತೀರ್ಮಾನವನ್ನು
ಮುಖ್ಯ ಮಂತ್ರಿ ಸಿದ್ದರಾಮಯ್ಯ , ಉಪಮುಖ್ಯ ಮಂತ್ರಿ ಡಿ.ಕೆ ಶಿವಕುಮಾರ್ ಜಿಲ್ಲೆಯ ಶಾಸಕರುಗಳಾದ, ಸಚಿವರುಗಳಾದ , ಡಾ.ಜಿ.ಪರಮೇಶ್ವರ , ಕೆ ಎನ್ ರಾಜಣ್ಣ, ಟಿ.ಬಿ.ಜಯಚಂದ್ರ , ಗುಬ್ಬಿಯ ವಾಸಣ್ಣ ಕೆ.ಷಡಾಕ್ಷರಿ , ಡಾ.ರಂಗನಾಥ್ , ವೆಂಕಟೇಶ್, ವಿಧಾನ ಪರಿಷತ್ ಸದಸ್ಯ ರಾಜೇಂದ್ರ ರಾಜಣ್ಣ ಜಿಲ್ಲಾಧ್ಯಕ್ಷ  ಚಂದ್ರಶೇಖರ್ ಗೌಡ ಮತ್ತು ಪಕ್ಷದ ಹಿರಿಯ ಮುಖಂಡರು ಟಿಕೆಟ್ ನೀಡುವ ಬಗ್ಗೆ ತೀರ್ಮಾನಿಸಲಿದ್ದಾರೆ.
ಜಿಲ್ಲೆಯಲ್ಲಿ ಹೆಸರುಗಳಿಸಿರುವ ಎಸ್ ಪಿ ಮುದ್ದಹನುಮೇಗೌಡರು ಬರುವಂತಹ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಯಾದರೆ ಅವರ ಗೆಲುವು ನಿಶ್ಚಿತವಾಗಿದ್ದು ಜಿಲ್ಲೆಯ ಪ್ರಜ್ಞಾವಂತ ಮತದಾರರು ಯುವಕರು ಅವರ ಕೈ ಹಿಡಿಯುವುದರಲ್ಲಿ ಯಾವುದೇ ಅನುಮಾನಗಳಿಲ್ಲ.
ಕಾಂಗ್ರೆಸ್ ಪಕ್ಷದ ಟಿಕೆಟ್ ಬೇಕೆಂದರೆ ರಾಹುಲ್ ಗಾಂಧಿ , ಮಲ್ಲಿಕಾರ್ಜುನ ಖರ್ಗೆ , ಸಿದ್ದರಾಮಯ್ಯ , ಡಿ.ಕೆ.ಶಿವಕುಮಾರ್ , ಪರಮೇಶ್ವರ , ಕೆ.ಎನ್ ರಾಜಣ್ಣ , ಟಿ.ಬಿ.ಜಯಚಂದ್ರ , ವಾಸಣ್ಣ , ಷಡಾಕ್ಷರಿ , ಡಾ.ರಂಗನಾಥ್ ವೆಂಕಟೇಶ್ ರಾಜೇಂದ್ರ ರಾಜಣ್ಣ ರವರ ಬಳಿ ಹೋಗಿ ಭೇಟಿ ಮಾಡಿ ಕೇಳಲಿ ತಪ್ಪೇನಿಲ್ಲಾ. ಆದರೆ ಚುನಾವಣೆಗೆ ಮುಂಚಿತವಾಗಿ ಈ ರೀತಿ ಹೇಳಿಕೆ ನೀಡುವುದು ತಪ್ಪು ಎಂದು ತಿಳಿಸಿದ್ದಾರೆ.

Related Articles

Back to top button
Disclaimer: WebOnline.in is not responsible for any news or content. We are only developers for this client And any type of content posted here belong's to site's owner/editor, not WebOnline.in Company

Adblock Detected

Please consider supporting us by disabling your ad blocker