
ಕುಣಿಗಲ್ :ತಾಲ್ಲೂಕಿನಲ್ಲಿ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ 2025 ಭರದಿಂದ ಸಾಗಿದ್ದು, ಗಣತಿಯಿಂದ ಯಾರಾದರೂ ಹೊರಗುಳಿದಿದ್ದರೆ ತಕ್ಷಣ ಸರ್ಕಾರ ಆರಂಭಿಸಿರುವ ಸಹಾಯ ವಾಣಿಗೆ ಸಂಪರ್ಕಿಸಬೇಕೆಂದು ತಾಲೂಕಿನ ತಹಸೀಲ್ದಾರ್ ರಶ್ಮಿ ಯು ರವರು ತಾಲೂಕಿನ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
13-08-2025 ರ ಆದೇಶದನ್ವಯ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ರಾಜ್ಯದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ -2025 ಮನೆ ಮನೆ ಸಮೀಕ್ಷೆಯಮ್ಮ ಸಪ್ಟೆಂಬರ್ -22 ರಿಂದ ಅಕ್ಟೋಬರ್ -7 ರವರೆಗೆ ರಾಜ್ಯದಾದ್ಯಂತ ಹಮ್ಮಿಕೊಳ್ಳಲಾಗಿರುತ್ತದೆ .
ಅದರಂತೆ ಕುಣಿಗಲ್ ತಾಲೂಕಿನಲ್ಲಿಯೂ 564 ಗಣತಿ ದಾರರು, 28 ಮಂದಿ ಮೇಲ್ವಿಚಾರಕರು ಸಮೀಕ್ಷೆಯನ್ನು ನಡೆಸುತ್ತಿದ್ದಾರೆ. ಆದರಿಂದ ತಾಲೂಕಿನಲ್ಲಿ ಯಾವುದೇ ಗ್ರಾಮ / ಹಟ್ಟಿ / ಕಾಲೋನಿ / ಬೀದಿಗಳಲ್ಲಿ ಕುಟುಂಬದಲ್ಲಿ ಸಮೀಕ್ಷೆ ನಡೆಯದೇ ಇದ್ದಲ್ಲಿ ಅಂತಹ ವಿವರಗಳನ್ನು ದಿ.07.10.2025 ರ ಒಳಗೆ ಕೆಳಕಂಡ ತಾಲ್ಲೂಕು ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷಾ ಸಹಾಯವಾಣಿಯನ್ನು ಸಂಪರ್ಕಿಸಿ, ಮಾಹಿತಿ ಒದಗಿಸುವುದು ಅಥವಾ ತಾಲ್ಲೂಕು ಆಡಳಿತದ ಗಮನಕ್ಕೆ ತರುವುದು ಹಾಗೂ ಸಾರ್ವಜನಿಕರು ತಮ್ಮ ಸಮೀಕ್ಷೆಯನ್ನು ತಾವೇ ಮಾಡಲು ಇಚ್ಚಿಸಿದಲ್ಲಿ ಕೆಳಕಂಡ ಅಂತರ್ಜಾಲ ಕೊಂಡಿ ಬಳಸಿ ಸಮೀಕ್ಷೆಯಲ್ಲಿ ಸ್ವ – ಇಚ್ಛೆಯಿಂದ ಭಾಗವಹಿಸಿ, ವಿವರಗಳನ್ನು ಭರ್ತಿ ಮಾಡಿ , ಸಮೀಕ್ಷಾ ಐಡಿ / ಅಪ್ಲಿಕೇಷನ್ ಐಡಿಯನ್ನು ಅಂಟಿಸಿರುವ ಯು.ಹೆಚ್.ಐ.ಡಿ ಸ್ಟಿಕರ್ ಮೇಲೆ ನಮೂದಿಸಬೇಕಾಗಿ ತಾಸಿಲ್ದಾರ್ ಅವರು ಮನವಿ ಮಾಡಿದ್ದಾರೆ.
ಅಂತರ್ಜಾಲ ಕೊಂಡಿ :https://kscbcselfdeclaration. Karnataka. gov. in/
ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿ ಸಂಖ್ಯೆ : 6362677730 ಮತ್ತು 9901357621 ಸಂಪರ್ಕಿಸಲು ಕೋರಿದೆ.



