ಗುಬ್ಬಿಸುದ್ದಿ

ಕಳಪೆ ಕಾಮಗಾರಿ : ಪ್ರಭಾವಿ ಗುತ್ತಿಗೆದಾರ ಬೊಮ್ಮೆನಹಳ್ಳಿ ಸತೀಶ್ ವಿರುದ್ಧ ತೀವ್ರ ಆಕ್ರೋಶ

ಗುಬ್ಬಿ: ತಾಲ್ಲೂಕಿನ ಚಿಕ್ಕ ಚೆಂಗಾವಿ ಗ್ರಾಮದ ಬಳಿ ಹೆಬ್ಬೂರು ಸಂಪರ್ಕ ರಸ್ತೆ ಬದಿ ಜೆ.ಜೆ.ಎಂ ಕಾಮಗಾರಿ ಮಾಡಲು ತೆಗೆದ 600 ಮೀಟರ್ ಟ್ರಂಚ್ ಗೆ ಯಾವುದೇ ಪೈಪ್ ಅಳವಡಿಸದೇ ಬಿಲ್ ಪಡೆದು ವಂಚಿಸಿ ರಸ್ತೆ ಬದಿ ಹಾಗೆಯೇ ಬಿಟ್ಟಿರುವ ಕಾರಣ ಇಂದು ನಡೆದ ಅಪಘಾತದ ತೀವ್ರತೆಗೆ ಗುತ್ತಿಗೆದಾರ ಸತೀಶ್ ಎಂಬಾತನನ್ನು ಕೂಡಲೇ ಕಪ್ಪು ಪಟ್ಟಿಗೆ ಸೇರಿಸುವಂತೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ.

ಕಳೆದ ಆರು ತಿಂಗಳ ಹಿಂದೆ 60 ಲಕ್ಷ ರೂಗಳ ಜಲ ಜೀವನ್ ಮಿಷನ್ ಯೋಜನೆ ಕಾಮಗಾರಿ ಆರಂಭಿಸಿ ರಸ್ತೆ ಬದಿ ಒಂದು ಮೀಟರ್ ಆಳ 600 ಮೀಟರ್ ದೂರ ತೋಡಿ ಹಾಗೆಯೇ ಬಿಟ್ಟು ಹೋಗಿರುವ ಕಾರಣ ತಿಂಗಳಾಂತ್ಯಕ್ಕೆ ನಾಲ್ಕೈದು ಅಪಘಾತಕ್ಕೆ ಮೂಲವಾಗಿದೆ. ಕಳಪೆ ಕಾಮಗಾರಿ ಬಗ್ಗೆ ಸ್ಥಳೀಯ ಗ್ರಾಮಸ್ಥರ ಆಕ್ರೋಶದ ಕಟ್ಟೆ ಪ್ರಭಾವಿ ಗುತ್ತಿಗೆದಾರನ ನಿರ್ಲಕ್ಷ್ಯ ಹಾಗೂ ಗುತ್ತಿಗೆದಾರ ತಾಲ್ಲೋಕಿನ ಹಲವು ಹಳ್ಳಿಗಳಲ್ಲಿ ಕೆಲಸ ನಿರ್ವಹಣೆ ಮಾಡಲಾಗಿದ್ದು ಅದು ಕಳಪೆಯಾಗಿದ್ದು ಕಳಪೆ ಬಗ್ಗೆ ಹೇಳಲಾಗದ ಅಧಿಕಾರಿಗಳ ಬಗ್ಗೆ ಜನರು ತೀವ್ರ ಅಸಮಾಧಾನ ಹೊರ ಹಾಕಿದ್ದಾರೆ.

 

ಮನೆ ಮನೆಗೆ ನಳ ಸಂಪರ್ಕ ಕಾಮಗಾರಿ ಓವರ್ ಹೆಡ್ ಟ್ಯಾಂಕ್ ಮಾಡದೆ ಪೈಪ್ ಲೈನ್ ಕೆಲಸ ಗ್ರಾಮದ ಹೊರ ಭಾಗದಲ್ಲಿ ನಡೆದಿಲ್ಲ. ತೋಟದಮನೆ ಇರುವಲ್ಲಿ ಮಾತ್ರ ಒಂದೆರೆಡು ಪೈಪ್ ಹಾಕಲಾಗಿದೆ. ಉಳಿದಂತೆ ಎಲ್ಲಾ ಹಲವು ಖಾಲಿ ಹಳ್ಳ ಹಾಗೆಯೇ ಬಿಡಲಾಗಿದೆ. ಈಗಾಗಲೇ ಇಲ್ಲಿ ನಡೆದಿರುವ ಅಪಘಾತಗಳು ಆತಂಕ ತಂದಿದೆ. ಈ ಹಳ್ಳದಿಂದ ಜೀವ ಹಾನಿಯಾದಲ್ಲಿ ಗುತ್ತಿಗೆದಾರ ಸತೀಶ್ ನೇರ ಹೊಣೆ ಹೊರಬೇಕು ಎಂದು ಸ್ಥಳೀಯ ಶ್ರೀನಿವಾಸ್ ಗೌಡ ಎಚ್ಚರಿಕೆ ನೀಡಿದರು.

ಚಿಕ್ಕ ಚೆಂಗಾವಿ ಹಾಗೂ ಬುಕ್ಕ ಸಾಗರ ಎರಡೂ ಗ್ರಾಮದಲ್ಲಿ ಮನೆ ಮನೆಗೆ ನೀರು ಕಾಮಗಾರಿ ಸಂಪೂರ್ಣ ಕಳಪೆ ಗುಣಮಟ್ಟದಲ್ಲಿದೆ. ಪೈಪ್ ಲೈನ್ ಕೆಲಸ ಗುಣಮಟ್ಟದಲ್ಲಿಲ್ಲ. ಊರಿನ ಸಿಸಿ ರಸ್ತೆ ಹಗೆದು ಹಾಳು ಮಾಡಿ ಅಲ್ಲಿನ ಹಳ್ಳ ಮುಚ್ಚದೆ ರಸ್ತೆಯನ್ನು ಸಂಪೂರ್ಣ ಹದಗೆಡಿಸಿದ್ದಾರೆ. ಈ ಬಗ್ಗೆ ಸಂಬಂಧಪಟ್ಟ ಇಂಜಿನಿಯರ್ ಗಳಿಗೆ ತಿಳಿಸಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಗುತ್ತಿಗೆದಾರ ಸತೀಶ್ ಕೆಲಸಕ್ಕೆ ಅಧಿಕಾರಿಗಳು ಸಾಥ್ ನೀಡಿದ್ದಾರೆ. ರಸ್ತೆಯ ಬದಿ ತೆಗೆದ ಹಳ್ಳ ಮಾರಕವಾಗಿದೆ. ಈ ಬಗ್ಗೆ ಕೂಡಲೇ ಅಧಿಕಾರಿಗಳು ಗುತ್ತಿಗೆದಾರರನ್ನು ಬ್ಲಾಕ್ ಲಿಸ್ಟ್ ಗೆ ಸೇರಿಸಬೇಕು ಎಂದು ಮಾಜಿ ಗ್ರಾಪಂ ಸದಸ್ಯ ಸಿ.ಡಿ.ರಾಘವೇಂದ್ರ ಆಗ್ರಹಿಸಿದ್ದಾರೆ.

ಜಲ ಜೀವನ್ ಮಿಷನ್ ಯೋಜನೆ ಆರಂಭದಲ್ಲಿ ಬುಕ್ಕಸಾಗರ ಗ್ರಾಮದಲ್ಲಿ ನಡೆದ ಕಳಪೆ ಕಾಮಗಾರಿ ಬಗ್ಗೆ ಹಲವು ಬಾರಿ ಅಧಿಕಾರಿಗಳಿಗೆ ದೂರು ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಕೆಲಸ ಮಾಡದೆ ಕಂಟ್ರಾಕ್ಟರ್ ಸತೀಶ್ ಅಧಿಕಾರಿಗಳಿಗೆ ತೋರಿಕೆಗೆ ಹಳ್ಳ ತೆಗೆದು ಅಲ್ಲಲ್ಲೇ ಪೈಪ್ ಅದ್ದಿ ಈಗ ಉಡಾಫೆ ಉತ್ತರ ನೀಡುತ್ತಿದ್ದಾರೆ. ಅಧಿಕಾರಿಗಳು ಸಹ ಈ ಬಗ್ಗೆ ನಿಗಾವಹಿಸಿಲ್ಲ.
ಸ್ಥಳೀಯ ಮುಖಂಡ ಬುಕ್ಕಸಾಗರ ಮಹದೇವ್.

ಕಾಮಗಾರಿ ನಿರ್ವಹಣೆಗೆ ತೆಗೆದಿರುವ ರಸ್ತೆ ಬದಿಯ ಹಳ್ಳ ಕೂಡಲೇ ಮುಚ್ಚಿಸಿ ಬಾಕಿ ಇರುವ ಓವರ್ ಹೆಡ್ ಟ್ಯಾಂಕ್ ಹಾಗೂ ಪೈಪ್ ಲೈನ್ ಕೆಲಸವನ್ನು ಮೂರು ತಿಂಗಳಲ್ಲಿ ಪೂರ್ಣ ಗೊಳಿಸುವ ಜೊತೆಗೆ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು.

ನಟರಾಜು. ಎ. ಇ. ಇಗ್ರಾಮೀಣ ಮತ್ತು ಕುಡಿಯುವ ನೀರು ನೈರ್ಮಲ್ಯ ಇಲಾಖೆ ಉಪ ವಿಭಾಗ ಗುಬ್ಬಿ.

Related Articles

Back to top button
Disclaimer: WebOnline.in is not responsible for any news or content. We are only developers for this client And any type of content posted here belong's to site's owner/editor, not WebOnline.in Company

Adblock Detected

Please consider supporting us by disabling your ad blocker